ಬಸ್‌ನಿಂದ ಆಯತಪ್ಪಿ ಬಿದ್ದು ಅಥಣಿ ಯೋಧ ಸಾವು

Advertisement

ಚಿಕ್ಕೋಡಿ: ರಜೆಯ ಮೇಲೆ ಬಂದಿದ್ದ ಅಥಣಿ ತಾಲೂಕಿನ ಕೊಕಟೂರ ಗ್ರಾಮದ ಯೋಧ ಹಾವೇರಿ ಬಸ್ ಹತ್ತುವಾಗ ಅಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಂಗಪ್ಪ ರಾಯಪ್ಪ ಸವದಿ (33) ಮೃತ ಯೋಧ. ಹಾವೇರಿ ಬಸ್ ನಿಲ್ದಾಣದಲ್ಲಿ ಅವಸರದಲ್ಲಿ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಕೊಕಟನೂರ ಗ್ರಾಮದ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡರವೇರಿಸಲಾಗಿದೆ. 13 ವರ್ಷದಿಂದ ಇವರು ಸೇನೆಯಲ್ಲಿ ಸೇವೆ ಮಾಡುತ್ತಿದ್ದರು. ಐಗಳಿ ಹಾಗೂ ಹಾವೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ