ಇದು ಜನಸ್ಪಂದನ ಅಲ್ಲ. ಇದು ಸಮಾವೇಶ ; ಡಿಕೆ ಸುರೇಶ್

Advertisement

ಬೆಂಗಳೂರು: ಜನರನ್ನು ಮೂರ್ಖರನ್ನಾಗಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಸಚಿವರು ಕುಣಿಯುತ್ತಿದ್ದಾರೆ. ಸಮಾವೇಶ ಮಾಡಿ ಅವರನ್ನು ಅವರೇ ಹೊಗಳಿ ಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಜನಸ್ಪಂದನ ಅಲ್ಲ. ಇದು ಸಮಾವೇಶ. ಜನಸ್ಪಂದನ ಅಂದರೆ ಜನರ‌ ಕಷ್ಟ ಆಲಿಸಬೇಕಾಗಿತ್ತು. ಬೆಂಗಳೂರು ಮುಳುಗಿದೆ. ರಾಜ್ಯದ ವಿವಿಧ ಭಾಗಗಳು ಮುಳುಗುತ್ತಿವೆ. ಆದರೆ, ಸರ್ಕಾರದವರು ಸಮಾವೇಶದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.