ಪಿಎಸ್​ಐ ಸ್ಕ್ಯಾಮ್​ ಬಗ್ಗೆ ಪ್ರೀಯಾಂಕ್ ಖರ್ಗೆ ಸುದ್ದಿಗೋಷ್ಠಿ

Advertisement

ಬೆಂಗಳೂರು: ಪಿಎಸ್​ಐ ಹಗರಣ ಹೊರತಂದಿದ್ದಕ್ಕೆ ಪೊಲೀಸ್​ರಿಂದ ನೊಟೀಸ್ ಕೊಡ್ತೀರಾ, ಎರಡೆರಡು ಮೂರು ನೊಟೀಸ್ ಕೊಡ್ತೀರಾ, ನಿಮ್ಮ ಶಾಸಕರೇ ಡೀಲ್ ಬಗ್ಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಂದು ಪಿಎಸ್​ಐ ಹಗರಣ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕ, ಇದ್ರಲ್ಲಿ ಭಾಗಿಯಾದ ಶಾಸಕರನ್ನ ಯಾಕೆ ಇನ್ನೂ ಒಳಗೆ ಹಾಕ್ತಿಲ್ಲ. ಐಪಿಎಸ್ ಅಧಿಕಾರಿಯನ್ನ ಒಳಗೆ ಹಾಕಿದ್ದೀರಾ, ಅವರು ಎಲ್ಲರ ಹೆಸರು ಹೇಳ್ತೇವೆ ಅನ್ನುತ್ತಿದ್ದಾರೆ.

ಒಬ್ಬ ಪ್ರಭಾವಿ ಸಚಿವರನ್ನೂ ರಕ್ಷಣೆ ಮಾಡಿದ್ರಿ, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ನೀಡಬೇಕೆಂದು ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದರು.