ಬೊಮ್ಮಾಯಿ ಕೇಂದ್ರಕ್ಕೆ ಹೋಗಿ ಬರಗಾಲದ ಮನವರಿಕೆ ಮಾಡಲಿ

M B Patil
Advertisement

ವಿಜಯಪುರ: ರಾಜ್ಯದಲ್ಲಿ ಮಳೆಯಾಗದೆ ಬಹಳಷ್ಟು ಭೂಮಿ ಬಿತ್ತನೆಯಾಗದೆ ಬರ ಆವರಿಸಿದೆ ಮೊದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಬರ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಡಾ. ಎಂ.ಬಿ.ಪಾಟೀಲ ಹೇಳಿದರು.
ತಾಲೂಕಿನ ತಾವರಖೇಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಾಗದೆ ಇರುವುದರಿಂದ ಬಹಳಷ್ಟು ಭೂಮಿ ಬಿತ್ತನೆಯಾಗಿಲ್ಲ. ಬರಗಾಲ ಘೋಷಣೆ ಮಾಡಬೇಕು ಎಂದು ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ. ಬೊಮ್ಮಾಯಿ ಅವರು ಇಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಪ್ರಧಾನ ಮಂತ್ರಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಕಡೆ ಎಲ್ಲರ ಬಳಿ ಹೋಗಿ ಬರದ ಬಗ್ಗೆ ಮಾಹಿತಿ ನೀಡಿ ಬರಗಾಲ ಘೊಷಣೆ ಮಾಡಿ ರೈತರಿಗೆ ಹಾಗೂ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ಬರಗಾಲ ಮಾನದಂಡಗಳು ಕೇಂದ್ರದ ಮಾನದಂಡಗಳಾಗಿವೆ. ಬೊಮ್ಮಾಯಿ ಅವರು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಾಡಹಾಕಿ ನಮ್ಮ ಸರಕಾರಕ್ಕೆ ಸಹಕಾರ ನೀಡುವಂತೆ ಕೇಳಲಿ ಎಂದರು.