ಮಾಜಿ ಶಾಸಕ ಆಲಮೇಲಕರ ಇನ್ನಿಲ್ಲ

Advertisement

ವಿಜಯಪುರ: ನಾಗಠಾಣ(ಹಿಂದಿನ ಬಳ್ಳೊಳ್ಳಿ) ಕ್ಷೇತ್ರದ ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ(67) ನಿಧನರಾದರು. ಕಳೆದ ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದಾಗಿ ಕೋಮಾದಲ್ಲಿದ್ದ ಆಲಮೇಲಕರ ರವಿವಾರ ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 1998 ರಲ್ಲಿ ರಮೇಶ ಜಿಗಜಿಣಗಿ ರಾಜೀನಾಮೆಯಿಂದ ತೆರವಾದ ಬಳ್ಳೊಳ್ಳಿ ಮೀಸಲು ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದುದ್ದ ವಿಲಾಸಬಾಬು ಆಲಮೇಲಕರ ಅಲ್ಪ ಅವಧಿಯಲ್ಲೇ ಜನಾನುರಾಗಿಯಾಗಿ ಕೆಲಸ ಮಾಡಿದ್ದರು. ಜೆ.ಎಚ್ ಪಟೇಲರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದರು.