ಯುವತಿಯರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದವನಿಗೆ ಬಿತ್ತು ಗೂಸ!

Advertisement

ದಾವಣಗೆರೆ: ಯುವತಿಯರಿಗೆ ಕರೆ ಮಾಡಿ, ಕಾಡಿಸುತ್ತಿದ್ದ ರೋಡ್ ರೋಮಿಯೋ ಒಬ್ಬನಿಗೆ ಯುವತಿ ಕುಟುಂಬಸ್ಥರು ಧರ್ಮದೇಟು ಕೊಟ್ಟ ಘಟನೆ ನಗರದ ಪಿ.ಜೆ. ಬಡಾವಣೆಯಲ್ಲಿ ಮಂಗಳವಾರ ನಡೆದಿರುವ ವೀಡಿಯೋಗಳು ವೈರಲ್ ಆಗಿವೆ.
ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದ ವಿನಯ್ ಜನರಿಂದ, ಮಹಿಳೆಯರಿಂದ ಧರ್ಮದೇಟು, ಚಪ್ಪಲಿ ಏಟು ತಿಂದ ಆರೋಪಿ. ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ವಿನಯ್ ಮಹಿಳೆಯರು, ವಿದ್ಯಾರ್ಥಿನಿಯರ ಜೊತೆಗೆ ಅನುಚಿತ ವರ್ತನೆ ತೋರುತ್ತಿದ್ದ. ಅವರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಸಂದೇಶ ಕಳಿಸುತ್ತಿದ್ದ ಎನ್ನಲಾಗಿದೆ.
ಖಾಸಗಿ ಬಸ್ಸು ಕಂಡಕ್ಟರ್ ಆಗಿದ್ದ ವಿನಯ್ ಬಸ್ಸಿನಲ್ಲೂ ಮಹಿಳಾ ಪ್ರಯಾಣಿಕರ ಜೊತೆಗೆ ಕೇವಲವಾಗಿ ವರ್ತಿಸುತ್ತಿದ್ದ. ಅಲ್ಲದೇ, ದಾವಣಗೆರೆ ತಾ. ಮಾಯಕೊಂಡ ಹೋಬಳಿಯ ಇಬ್ಬರು ಯುವತಿಯರಿಗೆ ಕರೆ ಮಾಡಿ, ಅಸಭ್ಯವಾಗಿ ವರ್ತನೆ ಮಾಡಿದ್ದನು. ಇದರಿಂದ ರೋಸಿ ಹೋಗಿದ್ದ ಯುವತಿಯರು ತಮ್ಮ ಕುಟುಂಬಸ್ಥರು, ಹಿರಿಯರ ಗಮನಕ್ಕೆ ವಿನಯ್ ಬಗ್ಗೆ ಅಳಲನ್ನು ತೋಡಿಕೊಂಡಿದ್ದರು.
ಪದೇಪದೇ ಫೋನ್ ಮಾಡಿ ತೊಂದರೆ ಕೊಡುತ್ತಿದ್ದ, ವೀಡಿಯೋ ಕಾಲ್ ಮಾಡುವಂತೆ ಪೀಡಿಸುತ್ತಾ, ತಾನೂ ವೀಡಿಯೋ ಕಾಲ್ ಮಾಡಿ ಪೀಡಿಸುತ್ತಿದ್ದ ಖಾಸಗಿ ಬಸ್ಸಿನ ಕಂಡಕ್ಟರ್ ತ್ಯಾವಣಿಗೆ ಗ್ರಾಮದ ವಿನಯ್‌ಗೆ ಉಪಾಯದಿಂದ ದಾವಣಗೆರೆ ಅಕ್ಕ ಮಹಾದೇವಿ ರಸ್ತೆಗೆ ಕರೆಸಿಕೊಂಡು, ಅಲ್ಲಿಂದ ಎವಿಕೆ ಕಾಲೇಜು ಪಕ್ಕದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಬಳಿ ಕರೆಸಿಕೊಳ್ಳಲಾಗಿತ್ತು.
ಯುವತಿಯರು ತನಗೆ ಕರೆಸಿಕೊಳ್ಳುತ್ತಿದ್ದಾರೆಂಬ ಸಾಕಷ್ಟು ನಿರೀಕ್ಷೆಯೊಂದಿಗೆ ಬಂದಿದ್ದ ಖಾಸಗಿ ಬಸ್ಸು ಕಂಡಕ್ಟರ್ ವಿನಯ್ ಕಾಣಿಸುತ್ತಿದ್ದಂತೆಯೇ ಯುವತಿಯರು ಪಾಲಕರು, ಗ್ರಾಮಸ್ಥರು, ಸ್ಥಳೀಯರು, ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆತನ ಮೊಬೈಲ್ ಕಸಿದುಕೊಂಡು ಇಟ್ಟುಕೊಂಡ ಪಾಲಕರು ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಕಳುವಾದ ಬಗ್ಗೆ ದೂರುನೀಡು ಎಂಬುದಾಗಿ ಹೇಳು ಹೇಳುತ್ತಲೇ ಚಪ್ಪಲಿಯಿಂದ ಹೊಡೆಯುತ್ತಾ, ಕಪಾಳ ಮೋಕ್ಷ ಮಾಡುತ್ತಾ ಆತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮೊಬೈಲ್ ಕಾಲ್ ಮಾಡಿ, ವೀಡಿಯೋ ಕಾಲ್ ಮಾಡಿ ಮಹಿಳೆಯರು, ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ಮಾತನಾಡುವುದು, ವರ್ತಿಸುವುದನ್ನು ಮಾಡುತ್ತಿದ್ದ, ಕಂಡ ಕಂಡಲ್ಲಿ ಹೆಣ್ಣು ಮಕ್ಕಳನ್ನು ರೇಗಿಸುತ್ತಿದ್ದ ಕಂಡಕ್ಟರ್ ತ್ಯಾವಣಿಗೆ ವಿನಯ್‌ನ ಹೆತ್ತವರ ಮುಂದೆಯೇ ಹೋಗಿ ಆತನ ವರ್ತನೆ ಬಗ್ಗೆ ದೂರುವುದಾಗಿ ಕೆಲ ಪಾಲಕರು ಹೇಳಿದರು.