ಇದು ಸರ್ಕಾರದ ಅಸಹಾಯಕತೆಯೋ…

Advertisement

ಮಂಡ್ಯ: `ನನ್ನ ನೀರು-ನನ್ನ ಹಕ್ಕು’ ಅಂತ ಪ್ರತಿಭಟನೆ ಮಾಡಿದವರಿಂದ ನಮಗೆ ಅನ್ಯಾಯವಾಗಲ್ಲ ಅಂದುಕೊಂಡಿದ್ದೇವು ಎಂದು ಮಾಜಿ ಸಚಿವ ಸಿ.ಟಿ ರವಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮಿಳುನಾಡು ಕೇಳುವ ಮುನ್ನವೇ ನೀರು ಯಾಕೆ ಬಿಟ್ಟರು? ವಾಸ್ತವ ಸ್ಥಿತಿಯನ್ನ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ಹೋರಾಟ ಮಾಡಬೇಕಾದವರು ಮಂಡ್ಯದ ಜನ ಮಾತ್ರವಲ್ಲ. ಬೆಂಗಳೂರಿನ ಜನ ಏನು ಮಾಡುತ್ತಿದ್ದಾರೆ? ಇದು ಸರ್ಕಾರದ ಅಸಹಾಯಕತೆಯೋ ಅಥವಾ ತಮಿಳುನಾಡು ಜೊತೆ ಸೇರಿ ಬೆಂಗಳೂರು ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದೋ ಗೊತ್ತಿಲ್ಲ. ಆದ್ರೆ ರಾಜಕೀಯ ಸಂಬಂಧಕ್ಕೆ ರೈತರನ್ನು ಸರ್ಕಾರ ಬಲಿ ಕೊಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.