ಟಾಟಾ ಏಸ್,ಲಾರಿ ಮಧ್ಯೆ ದಿಕ್ಕಿ: ನಾಲ್ವರು ಸಾವು

Advertisement

ಸಿಂಧನೂರು:ಲಾರಿಟಾಟಾ ಏಸ್ ವಾಹನ ಮುಖಾಮುಖಿ ದಿಕ್ಕಿ ನಾಲ್ವರು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್ ನಲ್ಲಿ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಟಾಟಾ ಏಸ್ ವಾಹನ ಚಾಲಕ ಇಸ್ಮಾಯಿಲ್(26),ರವಿ(20), ಲಿಂಗಪ್ಪ(55) ಎಂಬುವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಅಮರೇಶ (30) ಎಂಬುವರು ಆಸ್ಪತ್ತೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಧನೂರು ನಗರಕ್ಕೆ ಸೇರಿದ ಸಪ್ಲೈಯರ ಅಂಗಡಿಗೆ ಟಾಟಾ ಏಸ್ ವಾಹನ ಸಿಂಧನೂರಿನಿಂದ ಮಸ್ಕಿ ಕಡಗೆ ಹೊರಟಿತ್ತು. ಎದರಿನಿಂಸ ಬಂದ ಲಾರಿ ಮಧ್ಯೆ ದಿಕ್ಕಿ ಸಂಭವಿಸಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.