ವಂಚನೆ ಪ್ರಕರಣ, ೭ ಮಂದಿ ಬಂಧನ

Advertisement

ಬೆಳಗಾವಿ: ೧೦ ದಿನಗಳ ಹಿಂದೆ ದೂರು ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆ ಸೇರಿ ೭ ಮಂದಿ ಆರೋಪಿಗಳನ್ನು ಕಾಕತಿ ಠಾಣಾ ಪೊಲೀಸರು ಬಂಧಿಸಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ ೨ ವಾಹನ ಹಾಗೂ ಹನ್ನೊಂದು ಲಕ್ಷ ರೂ. ವಶವಡಿಸಿಕೊಳ್ಳಲಾಗಿದೆ.
ಗೋಕಾಕದ ಸಿದ್ದಗೌಡ ಬಿರಾದಾರ ಎಂಬುವರು ಡಿ.೧೮ರಂದು ನೀಡಿದ ದೂರಿನಂತೆ ಕಾಕತಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನೀಲ್ ವಿಭೂತಿ, ಸಚಿನ್ ಕುಮಾರ ಅಂಬ್ಲಿ, ಭರತೇಶ ಅಗಸರ, ಶಶಿಕುಮಾರ ದೊಡ್ಡನವರ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ೨ ವಾಹನ ಹಾಗೂ ೧೧ ಲಕ್ಷ ನಗದು ಸೇರಿ ಒಟ್ಟು ೨೨ ಲಕ್ಷ ಮೊತ್ತದ ವಸ್ತು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.