ಕಬಡ್ಡಿ ಹಬ್ಬದ ಲೋಗೋ ಬಿಡುಗಡೆ

Advertisement

ಹುಬ್ಬಳ್ಳಿ: ದೇಶಪಾಂಡೆನಗರದ ಜಿಮಖಾನ ಮೈದಾನದ ಆಡಿಟೋರಿಯಂನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಬಡ್ಡಿ ಹಬ್ಬದ ಲೋಗೋ ಬಿಡುಗಡೆ ಮಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಧಾರವಾಡ ಲೋಕಸಭಾ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ದೃಷ್ಟಿಯಿಂದ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ “ಧಾರವಾಡ ಸಂಸದ ಟ್ರೋಫಿ” ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು ಇಂದು ದೇಶಪಾಂಡೆನಗರದ ಜಿಮಖಾನ ಮೈದಾನದ ಆಡಿಟೋರಿಯಂನಲ್ಲಿ ಪ್ರಲ್ಹಾದ ಜೋಶಿ ಅವರು ಕಬ್ಬಡ್ಡಿ ಹಬ್ಬದ ಲೋಗೋ ಬಿಡುಗಡೆ ಮಾಡಿ ಎಲ್ಲಾ ತಂಡಗಳಿಗೆ ನೋಂದಾಯಿಸಿಕೊಳ್ಳಲು ಕರೆಕೊಟ್ಟು, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ ರೂ.40,000, ದ್ವಿತೀಯ ಸ್ಥಾನ ವಿಜೇತರಿಗೆ ರೂ. 20,000 ಹಾಗೂ ತೃತೀಯ ಸ್ಥಾನಕ್ಕೆ ರೂ. 10,000 ಬಹುಮಾನ ಹಾಗೂ ಲೋಕಸಭಾ ಕ್ಷೇತ್ರ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 1,00,000 ದ್ವಿತೀಯ ಬಹುಮಾನ ರೂ. 60,000 ತೃತೀಯ ಬಹುಮಾನ ರೂ. 30,000 ಬಹುಮಾನದ ಘೋಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಉಪಸ್ಥಿತರಿದ್ದರು.