ನಾ ಕಂಡ ಜಿಲ್ಲಾಧಿಕಾರಿಗಳು ಗ್ರಂಥ ಲೋಕಾರ್ಪಣೆ

Advertisement

ವಿಜಯಪುರ: ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರು ಬರೆದ ನಾ ಕಂಡ ಜಿಲ್ಲಾಧಿಕಾರಿಗಳು ಗ್ರಂಥವನ್ನು ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಮಹಾಸ್ವಾಮಿಗಳು ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.
ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರು ಕಳೆದ ಹಲವಾರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದು, ಅನೇಕ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿಯನ್ನು ಹತ್ತಿರದಿಂದ ಕಂಡಿದ್ದು ಅವರ ಸೇವೆ, ವಿಭಿನ್ನ ಆಡಳಿತ ಶೈಲಿಯನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.
ಪ್ರಕಾಶ ಅಕ್ಕಲಕೋಟ, ಶ್ರೀಕೃಷ್ಣ ಪಡಗಾನೂರ, ವಿಜಯ ಜೋಶಿ, ವಿಕಾಸ ಪದಕಿ, ರಾಕೇಶ ಕುಲಕರ್ಣಿ ಮೊದಲಾವರು ಉಪಸ್ಥಿತರಿದ್ದರು.