ರಾಷ್ಟ್ರಪತಿ ಕಾರ್ಯಕ್ರಮ ನಡೆಯುವ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ

Advertisement

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ಅಕ್ಕ ಪಕ್ಕದಲ್ಲಿಯೂ ಸಹ ವಾಹನಗಳು ನಿಲುಗಡೆ ಮಾಡುವುದನ್ನು ನಿರ್ಬಂಧಿಸಿ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.
ವಾಹನಗಳ ಸಂಚಾರ ನಿರ್ಬಂಧ:
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ಜಿಮಖಾನ ಕ್ಲಬ್‌ದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಷ್ಟ್ರಪತಿಗಳ ಕಾರ್ಯಕ್ರಮ ಇರುವುದರಿಂದ ಭದ್ರತೆಯ ಹಿತದೃಷ್ಠಿಯಿಂದ ಸವಾಯಿ ಗಂಧರ್ವ ಹಾಲ್‌ದಿಂದ ಕಿಮ್ಸ್ ಹಿಂದಿನ ಗೇಟ್ ಪೈ ಹೊಟೇಲ್‌ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಕಿಮ್ಸ್ ಹಿಂದಿನ ಗೇಟ್ `ಫುಟ್‌ಬಾಲ್ ಮೈದಾನ’ದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕಾರ್ಯಕ್ರಮಕ್ಕೆ ಆಗಮಿಸಲು ಕೋರಲಾಗಿದೆ.
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್, ಗುಜರಾತ್ ಭವನ, ಕುಂಭಕೋಣಂ ಪ್ಲಾಟ್, ಗಣಪತಿ ಗುಡಿ ಕ್ರಾಸ್‌ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರು, ವಾಹನ ಸವಾರರು, ವಾಹನ ಚಾಲಕರು ಸಹಕರಿಸಿ ಈ ನಿಯಮ ಪಾಲನೆ ಮಾಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.