ಶಿವಾಜಿ ಮಹಾರಾಜರು ಇಸ್ಲಾಂ ವಿರೋಧಿ ಎಂದವರ ಕೊರಳಪಟ್ಟಿ ಹಿಡೀರಿ…

Advertisement

ಧಾರವಾಡ: `ಛತ್ರಪತಿ ಶಿವಾಜಿ ಮಹಾರಾಜರು ಮುಸಲ್ಮಾನ ವಿರೋಧಿ ಎಂದು ಯಾರಾದರೂ ಹೇಳಿದರೆ ಅವರ ಕೊರಳಪಟ್ಟಿ ಹಿಡಿಯಿರಿ. ಅವರಿಗೆ ನೈಜ ಇತಿಹಾಸ ತಿಳಿಸಿಕೊಡಿರಿ’ ಎಂದು ಸಚಿವ ಸಂತೋಷ ಲಾಡ್ ಅವರು ನೀಡಿದ ಕರೆ.
ಶಿವಾಜಿ ಮೊಘಲ್‌ರೊಂದಿಗೆ ಹೋರಾಟ ಮಾಡಿ ಧರ್ಮವನ್ನು ರಕ್ಷಣೆ ಮಾಡಿದ ಜಾತ್ಯಾತೀತ ಚಕ್ರವರ್ತಿ ಎಂಬುದನ್ನೂ ಸರಿಯಾಗಿ ತಿಳಿಸಿರಿ. ಖೊಟ್ಟಿ ಇತಿಹಾಸ ಪ್ರಚಾರ ಮಾಡದಂತೆ ಬುದ್ಧಿ ಹೇಳಬೇಕು ಎಂದು ತಾಕೀತು ಮಾಡಿದರು.
ಕೆಲವರು ತಮ್ಮ ಹಿತಾಸಕ್ತಿಗಾಗಿ ಇತಿಹಾಸವನ್ನು ತಿರುಚಿದ್ದಾರೆ. ಶಿವಾಜಿ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ. ಶಿವಾಜಿ ಮಹಾರಾಜರು ಎಂದಿಗೂ ಮುಸಲ್ಮಾನರನ್ನು ವಿರೋಧಿಸಿರಲಿಲ್ಲ. ಮೊಘಲರು ದಾಳಿ ನಡೆಸಿದ ಸಂದರ್ಭದಲ್ಲಿ ಮೊಘಲ್ ಅರಸರ ವಿರುದ್ಧ ಧರ್ಮ ರಕ್ಷಣೆಗಾಗಿ ಹೋರಾಟ ಮಾಡಿದರು. ಶಿವಾಜಿ ಧರ್ಮರಕ್ಷಕರೇ ಹೊರತು ಇಸ್ಲಾಂ ವಿರೋಧಿಯಲ್ಲ. ಶಿವಾಜಿಯನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವವರ ಬಗ್ಗೆ ಮರಾಠಾ ಸಮಾಜದವವರು ಜಾಗೃತರಾಗಿರಬೇಕು ಎಂದರು.