ರಾಮ ಮಂದಿರ ಮೇಲೆ‌ ಹಸಿರು‌ ಧ್ವಜ ಹಾರಿಸಿದ ಸ್ಟೇಟಸ್ ಇಟ್ಟ ಯುವಕನ ಬಂಧನ

Advertisement

ಧಾರವಾಡ: ಅಯೋಧ್ಯೆ ರಾಮಮಂದಿರ ಫೋಟೋದ ಮೇಲೆ ಹಸಿರು ಬಾವುಟದ ಚಿತ್ರದ ಧ್ವಜವನ್ನಿಟ್ಟು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ಘಟನೆ ನಡೆದಿದೆ.
ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ ಚಿತ್ರ ಹಾಕಿ ಸ್ಟೇಟಸ್ ಇಟ್ಟ ಯುವಕ ‘ಇಸ್ಲಾಮಿಕ್ ಪವರ್ ತೋರಿಸುತ್ತೇವೆ’ ಅಂತಾ ಸ್ಟೇಟಸ್ ಹಾಕಿಕೊಂಡಿದ್ದ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಯುವಕ ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ವಿರುದ್ದ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು, ಯುವಕನನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವಕನ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಸ್ಟೇಟಸ್ ಹಾಕಿದ ಯುವಕನ ಮನೆಗೆ ಹೋಗಿ ಆಮಂತ್ರಣ ನೀಡಲು ಸಂಘಟನೆ ಮುಂದಾಗಿದೆ. ಜ. 30ರಂದು ತಡಕೋಡ ಗ್ರಾಮಕ್ಕೆ ತೆರಳಲು ಶ್ರೀರಾಮ ಸೇನೆ ನಿರ್ಧಾರ ಮಾಡಿದ್ದು, ಯುವಕನ ಮನೆಗೆ ತೆರಳಿ ಆಮಂತ್ರಣ ನೀಡಿ, ನಾವೇ ಖರ್ಚು ಕೊಟ್ಟು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೇವೆ ಅಲ್ಲಿಗೆ ಬಂದು ಹಸಿರು ಧ್ವಜ ಹಾರಿಸು ಅನ್ನೋ ಚಾಲೆಂಜ್ ಮಾಡಲು ನಿರ್ಧಾರ ಮಾಡಿದ್ದಾರೆ.