ದಾವಣಗೆರೆ: ಹೆಡ್ಕಾನ್ಸ್ಟೇಬಲ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹೊನ್ನೂರಸ್ವಾಮಿ ಎಂಬುವರೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದವರು.
ಜನವರಿ 31ರಂದು ಅಪಘಾತವಾಗಿದ್ದ ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎನ್ನುವರಿಗೆ ಸೇರಿದ ದ್ವಿಚಕ್ರ ವಾಹನವನ್ನು ಮಾಯಕೊಂಡ ಠಾಣೆಗೆ ತಂದಿದ್ದ ಹೊನ್ನೂರಸ್ವಾಮಿ ಅವರು; ಬೈಕ್ ಬಿಡಲು ಆರು ಸಾವಿರ ರೂಪಾಯಿ ಲಂಚ ನೀಡುವಂತೆ ಕಾನ್ಸ್ಟೇಬಲ್ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ 1 ಸಾವಿರ ಪಡೆದಿದ್ದ ಹೊನ್ನೂರುಸ್ವಾಮಿ ಉಳಿದ 5 ಸಾವಿರ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆ ಹಾಕಿದ್ದಾರೆ. ಕಾನ್ಸ್ಟೇಬಲ್ ಹೊನ್ನೂರುಸ್ವಾಮಿ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ಮಾರ್ಗದರ್ಶನಲ್ಲಿ, ಇನ್ಸ್ಪೆಕ್ಟರ್ ಹೆಚ್. ಎಸ್. ರಾಷ್ಟ್ರಪತಿ, ಪ್ರಭು, ಮಧುಸೂಧನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.