ಖಾಸಗೀಕರಣ ವಿರುದ್ಧ ೫ರಂದು ಪ್ರತಿಭಟನೆ ಎಚ್ಚರಿಕೆ

Advertisement

ಬೆಂಗಳೂರು: ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ನಿಗಮಗಳನ್ನು ಖಾಸಗೀಕರಣ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಎಚ್ಚರಿಸಿದೆ. ನಾವು ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದೇವೆ ಒಂದು ವೇಳೆ ನಮ್ಮ ಮಾತು ಮೀರಿ ಖಾಸಗೀಕರಣಕ್ಕೆ ಮುಂದಾದರೆ ಮಾ.೫ ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟಟನೆ ನಡೆಸಲಾಗುವುದು ಎಂದು ಫೆಡರೇಷನ್ ಎಚ್ಚರಿಸಿದೆ.