ಜಾತಿ ಗಣತಿ ಬಿಡುಗಡೆ ಮಾಡಿದರೆ ಹೋರಾಟ

ಶಾಮನೂರು ಶಿವಶಂಕರಪ್ಪ
Advertisement

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಸ್ವೀಕಾರಕ್ಕೆ ನಮ್ಮ ವಿರೋಧ ಇದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಶನಿವಾರ ಸುದ್ದಿ ಗಾರರೊಂದಿಗೆ ಮಾತ ನಾಡಿದ ಅವರು, ಕಸದ ಬುಟ್ಟಿಯಲ್ಲಿಟ್ಟಿದ್ದ ಜಾತಿ ಗಣತಿ ವರದಿ ತಂದಿದ್ದಾರೆ. ಹತ್ತು ವರ್ಷದ ಹಿಂದಿನ ಕಸದಲ್ಲಿ ಬಿದ್ದಿದ್ದ ಗಣತಿ ಕೊಟ್ಟಿದ್ದಾರೆಂದು ಕಿಡಿಕಾರಿದರು.
ಕಾಂತರಾಜ್ ಬರೆದಿದ್ದಾರೋ, ಹೆಗಡೆ ಬರೆದಿದ್ದಾರೋ ಯಾರಿಗೂ ಗೊತ್ತಿಲ್ಲ. ಲಿಂಗಾಯತರು ಎರಡು ಕೋಟಿ ಜನ ಇದ್ದೇವೆ, ಕಡಿಮೆ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಜಾತಿ ಗಣತಿ ವರದಿ ಸ್ವೀಕಾರ ಮಾಡಿದ್ದಾರೆ, ಇನ್ನೂ ಪಾಸ್ ಮಾಡಿಲ್ಲ. ಗಣತಿ ವರದಿ ತಂದು ಕೊಟ್ಟಿದ್ದಾರೆ, ಇವರು ಪಡೆದಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದ್ದೇ ಇದೆ. ಮುಂದಿನ ಹೋರಾಟ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದರು.