ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ?

Advertisement

ಬೆಂಗಳೂರು: ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಪರ ಜೈಕಾರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ… ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ?
ಡಿ. ಕೆ. ಶಿವಕುಮಾರರವರೇ…‌ ಈಗಲಾದರೂ ನಿಮ್ಮ ಬ್ರದರ್ಸ್‌ಗಳನ್ನು ಬಂಧಿಸುತ್ತೀರಾ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದ ಪರ ಜೈಕಾರವೂ ಮೊಳಗುತ್ತದೆ, ಬಾಂಬ್‌ಗಳು ಸಿಡಿಯುತ್ತದೆ…ಒಟ್ಟಾರೆಯಾಗಿ ರಾಜ್ಯದ ಸ್ಥಿತಿ ಅತ್ಯಂತ ಶೋಚನೀಯವಾಗಿರುವುದು ಸ್ಪಷ್ಟ ಎಂದಿದ್ದಾರೆ.