ಛಲ ಬಿಡದ ತ್ರಿವಿಕ್ರಮರಂತೆ ಸಾತ್ವಿಕ್ ರಕ್ಷಣೆ

Advertisement

ಬೆಂಗಳೂರು: ಸತತ 21 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ಎನ್ ಡಿ ಆರ್ ಎಫ್, ಪೊಲೀಸ್ ತಂಡ, ಜಿಲ್ಲಾ ಆಡಳಿತಕ್ಕೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೃತಜ್ಞತೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಛಲ ಬಿಡದ ತ್ರಿವಿಕ್ರಮರಂತೆ ನಿರಂತರ 21 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎರಡು ವರ್ಷದ ಸಾತ್ವಿಕ್ ಅನ್ನು ನಮ್ಮ ರಕ್ಷಣಾ ತಂಡಗಳು ರಕ್ಷಿಸಿವೆ. ಸ್ಥಳದಲ್ಲಿ ಹರ್ಷೋದ್ಗಾರ ಮೂಡಿದೆ. ಈ daredevil ರಂತ ಕಾರ್ಯಾಚರಣೆ ನಡೆಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ತಾಯಿ ಸವದತ್ತಿ ಎಲ್ಲಮ್ಮನ ಆಶೀರ್ವಾದದಿಂದ ಸಾತ್ವಿಕ್ ಬದುಕುಳಿದಿದ್ದಾನೆ ಎಂದಿದ್ದಾರೆ.