ಚೆನ್ನೈ: ಕೇರಳದ ವಯನಾಡಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿದ್ದ ಹೆಲಿಕಾಪ್ಟರನ್ನು ಚುನಾವಣಾಧಿಕಾರಿಗಳು ಸೋಮವಾರ ತಪಾಸಣೆ ಮಾಡಿದ್ದಾರೆ. ನೀಲಗಿರಿಯ ಕಾಲೇಜು ಮೈದಾನದಲ್ಲಿ ಬಂದಿಳಿದ ಹೆಲಿಕಾಪ್ಟರ್ ಶೋಧನೆ ಕೈಗೊಂಡ ಆಯೋಗದ ತನಿಖಾಧಿಕಾರಿಗಳು ರಾಹುಲ್ಗೆ ಹೋಗಲು ಅನುಮತಿ ನೀಡಿದರು. ಬಳಿಕ ರಾಹುಲ್ ವಯನಾಡಿಗೆ ತೆರಳಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು.