ಯತ್ನಾಳ ಗೊಡ್ಡೆಮ್ಮೆ ಇದ್ದಂತೆ

ವಿಜಯಾನಂದ ಕಾಶಪ್ಪನವರ್
Advertisement

ಹುನಗುಂದ : ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಖಂಡ ವಿಜಯಪುರ ಜಿಲ್ಲೆಯ ಗೊಡ್ಡು ಎಮ್ಮೆ ಇದ್ದಂತೆ ಎಂದು ಹುನಗುಂದ ಶಾಸಕ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಟೀಕಿಸಿದ್ದಾರೆ.
ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ನಡೆದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯತ್ನಾಳ ಅವರನ್ನು ಭಾಷಣದುದ್ದಕ್ಕೂ ಏಕವಚನದಲ್ಲೇ ಟೀಕಿಸಿದರು. ಆ ಎಮ್ಮೆ ಹಿಂಡುವುದೇ ಇಲ್ಲ. ಗೊಡ್ಡ ಬಿದೈತಿ. ಅಂವಾ ಎಲ್ಲಾ ಜಾತಿಗೂ ಬೈತಾನ, ಯಾರಿಗೂ ಬಿಟ್ಟಿಲ್ಲ. ಬಹಳ ದಿನದಿಂದ ಎಮ್ಮಿಕರ ಒದರಾಕ ಹತ್ತೈತಿ ಎಂದರು.