ಸಂಪರ್ಕ ಸೇತುವೆಯಾಗಿ ಸಲಹಾ ಪೆಟ್ಟಿಗೆ

Advertisement

ಬೆಂಗಳೂರು: ಸಂಪರ್ಕ ಸೇತುವೆಯಾಗಿ ಸಲಹಾ ಪೆಟ್ಟಿಗೆ ಉಪಯುಕ್ತವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಾರ್ಯಕರ್ತರಿಂದ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲು ಅನುಕೂಲವಾಗುವಂತೆ ಸಲಹಾ ಪೆಟ್ಟಿಗೆಯನ್ನು ಅಳವಡಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್‌ ಮಾಡಿದ್ದು ಭವಿಷ್ಯತ್ತಿನಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ವಿಸ್ತೃತಗೊಳಿಸಲು ಅನುವಾಗುವಂತೆ ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳು ರಚನಾತ್ಮಕ ಸಲಹೆಗಳನ್ನು ನೀಡಲು ಕರೆ ನೀಡಲಾಯಿತು.

ಸಂಘಟನೆಯಲ್ಲಿ ಕಾರ್ಯಕರ್ತರ ಸಹಭಾಗಿತ್ವ ಹಾಗೂ ಅಭಿಪ್ರಾಯಗಳು ಅತ್ಯಂತ ಅಮೂಲ್ಯವಾಗಿದ್ದು ಇದಕ್ಕಾಗಿ ಒಂದು ಸಂಪರ್ಕ ಸೇತುವೆಯಾಗಿ ಈ ಸಲಹಾ ಪೆಟ್ಟಿಗೆ ಉಪಯುಕ್ತವಾಗಲಿದ್ದು, ಈ ನಿಟ್ಟಿನಲ್ಲಿ ಸಂಘಟನೆಗೆ ಪೂರಕವಾಗುವ ಅಭಿಪ್ರಾಯ ಹಾಗೂ ಸಲಹೆಗಳು ಮುಕ್ತವಾಗಿ ಹರಿದು ಬರಲಿ ಎಂದಿದ್ದಾರೆ.