ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ದರ್ಗಾದಲ್ಲಿ ಎದ್ದಾಡಿತು…

Advertisement

ಬಾಗಲಕೋಟೆ: ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಹೋಗಿದೆ ಎಂದು ಮನೆಗೆ ಕರೆದುಕೊಂಡು ಹೊರಟಿದ್ದ ಮಗುವೊಂದು ಇಲ್ಲಿನ ಮುರ್ತುಜಾ ಖಾದ್ರಿ ದರ್ಗಾಕ್ಕೆ ತೆಗೆದುಕೊಂಡು ಬಂದಾಗ ಎದ್ದಾಡಿದ ಸ್ವಾರಸ್ಯಕರ ಸಂಗತಿ ಗುರುವಾರ ಸಂಜೆ ನಡೆದಿದೆ.
ಇಲ್ಲಿನ ದ್ಯಾಮಣ್ಣ ಬಸವರಾಜ ಭಜಂತ್ರಿ ಎಂಬ ಒಂದು ವರ್ಷದ ಮಗುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಗುರುವಾರ ಸಂಜೆ ಮಗುವಿನ ಪ್ರಾಣ ಹೋಗಿದೆ, ಊರಿಗೆ ಒಯ್ದು ಬಿಡಿ ಎಂದು ವೈದ್ಯರು ಹೇಳಿದ್ದಾರೆ. ಮಗುವನ್ನು ವಾಹನದಲ್ಲಿ ಮರಳಿ ಇಳಕಲ್‌ಗೆ ತರುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಅದು ಸ್ವಲ್ಪ ಕೆಮ್ಮಿದೆ. ಮನೆಯವರಿಗೆ ಆಶ್ಚರ್ಯವಾಗಿ ಅದನ್ನು ನಗರದ ಕೋಮು ಸಾಮರಸ್ಯ ಕೇಂದ್ರವಾದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತಂದು ಅಲ್ಲಿ ಸಮಾಧಿ ಮುಂದಿನ ಕಟ್ಟೆಯ ಮೇಲೆ ಮಲಗಿಸಿದ್ದಾರೆ.
ಪವಾಡ ಎಂಬಂತೆ ಮಗು ಆ ಜಾಗದಲ್ಲಿ ಕೈಕಾಲು ಆಡಿಸತೊಡಗಿತು. ಅದರ ಅಂತ್ಯಸಂಸ್ಕಾರಕ್ಕೆಂದು ಬಂದ ಜನ ಅಚ್ಚರಿಗೊಂಡರು. ಈಗ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.