ಸಿಡಿಲು ಬಡಿದು ವ್ಯಕ್ತಿ ಸಾವು

Advertisement


ಹುಬ್ಬಳ್ಳಿ : ಕೆಲಸ ಮುಗಿಸಿ ದ್ವಿಚಕ್ರವಾಹನದಲ್ಲಿ ಊರಿಗೆ ಹೊರಟ್ಟಿದ್ದ ವ್ಯಕ್ತಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪ್ರವೀಣ ಬಡಿಗೇರ ( 32) ಮೃತಪಟ್ಟ ವ್ಯಕ್ತಿ. ಕುಂದಗೋಳ ತಾಲ್ಲೂಕು ಪಶುಪತಿಹಾಳ ಗ್ರಾಮದವರು. ಇವರು ಹುಬ್ಬಳ್ಳಿಯಲ್ಲಿ ಕೆಲಸ ಮುಗಿಸಿ ರಾತ್ರಿ ದ್ವಿಚಕ್ರವಾಹನದಲ್ಲಿ ಊರಿಗೆ ಹೊರಟಿದ್ದಾಗ ಸಂಶಿ – ಪಶುಪತಿಹಾಳ ರಸ್ತೆಯಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕುಂದಗೋಳ ಠಾಣೆ ಪೊಲೀಸರು ಭೇಟಿ ನೀಡಿದ್ದರು.