ಹಿಂದುಗಳ ರಕ್ಷಣೆಗೆ 25 ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್

ಮುತಾಲಿಕ್‌
Advertisement

ಚಿಕ್ಕಮಗಳೂರು: ಬಿಜೆಪಿಯವರು 25 ವರ್ಷಗಳಿಂದ ದತ್ತಪೀಠದ ಹೋರಾಟದ ಲಾಭ ಪಡೆದಿದ್ದಾರೆ. ಬಿಜೆಪಿ ಹುಟ್ಟಿದ್ದೆ ಹಿಂದುತ್ವಕ್ಕಾಗಿ, ಪ್ರಾಮಾಣಿಕತೆಗಾಗಿ, ಆದರೆ ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಟ್ಟರೆ ಯಾರೂ ಕೂಡ ಹಿಂದುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ, ಹಿಂದುಗಳ ರಕ್ಷಣೆಗಾಗಿ 25 ಪ್ರಖರ ಹಿಂದುವಾದಿಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ, ಗೆದ್ದು ದತ್ತಪೀಠ ಮುಕ್ತಿ, ಗೋಹತ್ಯೆ, ಮತಾಂತರ, ಲವ್‍ಜಿಹಾದ್​ಅನ್ನು ನಿಲ್ಲಿಸುತ್ತೇವೆ, ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಧ್ಯಮದವರೊಂದಿಗೆ ಮಾತನಾಡಿದರು.