ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಕೋಲಾರ
Advertisement

ಸಿದ್ದರಾಮಯ್ಯ ಕೋಲಾರ ಪ್ರವಾಸದಲ್ಲಿ ನಿಷ್ಠಾವಂತ ಕಾಂಗ್ರೆಸ್ ಮುಖಂಡರ ಕಡಗಣನೆ ಆರೋಪ, ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿ ಶಾಸಕ ರಮೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಎಚ್ ಮುನಿಯಪ್ಪ ಬೆಂಬಲಿಗರು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುಲು ಬಂದಿದ್ದ ಸಿದ್ದರಾಮಯ್ಯ ಅವರನ್ನು ರಮೇಶ್ ಕುಮಾರ್ ಬಣ ದಾರಿ ತಪ್ಪಿಸಿದೆ. ಸಿದ್ದರಾಮಯ್ಯ ಜೊತೆ ನಮ್ಮ ಅಳಲು ತೋಡಿಕೊಳ್ಳಲು ರಮೇಶ್ ಕುಮಾರ್ ಗ್ಯಾಂಗ್ ಬಿಟ್ಟಿಲ್ಲ, ಸಿದ್ದರಾಮಯ್ಯ ಪ್ರವಾಸದಲ್ಲಿ ಬೇರೆ ಬೇರೆ ತಾಲ್ಲೂಕಗಳಿಂದ ಜನರನ್ನು ಘಟ್ಟಬಂಧನ ನಾಯಕರು ಕರೆತಂದಿದ್ರು. ನಿಜವಾದ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಮುಖಂಡರು ಬಂಗಾರಪೇಟೆ ವೃತ್ತದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಲು ಬಂದಿದ್ರು. ಆದರೆ ಘಟ್ಟಬಂಧನ ನಾಯಕರು ನಮ್ಮ ಜೊತೆ ಸಿದ್ದರಾಮಯ್ಯ ಮಾತನಾಡದಂತೆ ಅವರನ್ನು ದಾರಿ ತಪ್ಪಿಸಿದರು. ಸೌಜನ್ಯಕ್ಕೆ ಅದರೂ ನಮ್ಮ ಜೊತೆ ಸಿದ್ದರಾಮಯ್ಯ ಮಾತನಾಡಿಸುವ ಕೆಲಸವನ್ನು ರಮೇಶ್ ಕುಮಾರ್ ಮಾಡಲಿಲ್ಲ, ನಾವು ನಿಜವಾದ ನಿಷ್ಠಾವಂತ ಕಾಂಗ್ರಸಿಗರು, ಅವರು ನಕಲಿ
ರಮೇಶ್ ಕುಮಾರ್ ಬಾಯಲ್ಲಿ ಜೇನು ಇಟ್ಟುಕೊಂಡು ಮಾತನಾಡುತ್ತಾರೆ, ಹೊಟ್ಟೆಯಲ್ಲಿ ವಿಷ ತುಂಬಿರುತ್ತೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ,
ಅವರು ಬಂದರೆ ನಾವೆಲ್ಲರೂ ಸ್ವಾಗತಿಸುತ್ತೇವೆ, ಕೆಎಚ್ ಮುನಿಯಪ್ಪ ಅವರನ್ನು ಕಡೆಗಣಿಸಿದರೆ ಕಷ್ಟವಾಗುತ್ತೆ, ಸಿದ್ದರಾಮಯ್ಯ ಅವರು ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು, ಕೋಲಾರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸನ್ ಘಟಕದ ಆಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಜಯದೇವ್ ಹೇಳಿಕೆ.