ಕೊತ್ವಾಲ್ ರಾಮಚಂದ್ರನ ಶಿಷ್ಯನಿಂದ ಪಾಠ ಕಲಿಯಬೇಕಿಲ್ಲ – ಶಾಸಕ ಯತ್ನಾಳ್

Advertisement

ವಿಜಯಪುರ: ಬಿಜೆಪಿ ಜತೆ ರೌಡಿಗಳ ನಂಟಿದೆ ಎಂಬ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, ಕೊತ್ವಾಲ್ ರಾಮಚಂದ್ರನ ಶಿಷ್ಯನಿಂದ ಪಾಠ ಕಲಿಯಬೇಕಿಲ್ಲ. ಕೊತ್ವಾಲ್ ರಾಮಚಂದ್ರ ಬೆಂಗಳೂರಿಗೆ ದೊಡ್ಡ ರೌಡಿ, ಅವನಿಗೆ ಸಿಗರೇಟ್​ ತಂದು ಕೊಡುತ್ತಿದ್ದವರ ಕೈಯಲ್ಲಿ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ.