ಮುರುಘಾ ಶ್ರೀ ಪ್ರಕರಣ: ಸೌಭಾಗ್ಯ ಬಂಧನ

Advertisement

ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಭಾಗ್ಯ ಬಸವರಾಜನ್‌ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ದಾವಣಗೆರೆಯಲ್ಲಿ ರಾತ್ರೋರಾತ್ರಿ ಬಂಧಿಸಿದ್ದಾರೆ.
ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಅವರ ಪತ್ನಿ ಸೌಭಾಗ್ಯ ಅವರೇ ಬಂಧನಕ್ಕೊಳಗಾಗಿದ್ದು, ವಶಕ್ಕೆ ಪಡೆದಿರುವ ಪೊಲೀಸರು ಇವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.
ಕಳೆದ ನ.9 ರಂದು ಗ್ರಾಮಾಂತರ ಠಾಣೆಯಲ್ಲಿ ಪಿತೂರಿ ಪ್ರಕರಣ ದಾಖಲು ಆಗಿದ್ದು, ಅದರಂತೆ ಮುರುಘಾ ಶರಣರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಸುಳ್ಳು ಪ್ರಕರಣ ದಾಖಲು ಮಾಡಲು ಸೌಭಾಗ್ಯ ಬಸವರಾಜನ್ ಪ್ರಚೋದಿಸಿದ್ದರು ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ದೂರು ನೀಡಿದ್ದರು.