ಮೊಸರುಗಡಗಿ ಒಡೆದ ಬಾಲ ಕೃಷ್ಣ

ಕೃಷ್ಣ
Advertisement

ಲಕ್ಕುಂಡಿ: ಇಲ್ಲಿಯ ಶ್ರೀ ಕೃಷ್ಣ ಗೊಲ್ಲ ಸಮಾಜ ಹಾಗೂ ನಾಗನಾಥ ಭಜನಾ ಸಂಘದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠ್ಠಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗೊಲ್ಲರಓಣಿಯಲ್ಲಿರುವ ಶ್ರೀ ಕೃಷ್ಣ ದೇವಾಲಯದಲ್ಲಿ ಕೃಷ್ಣನ ಮೂರ್ತಿಗೆ ಹಾಲು, ಮೊಸರುಅಭಿಷೇಕ ಹಾಗೂ ೧೦೦೧ ತುಳಿಸಿ ಎಲೆಯ ವಿಶೇಷ ಪೂಜೆಯನ್ನುಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಾಗರಾಜ ಭಟ್ಟ ಕುಲಕರ್ಣಿಯವರು ನೆರವೇರಿಸಿದರು. ನಂತರ ಮೂರ್ತಿಯ ಮೆರವಣಿಗೆಯನ್ನು ಸುಮಂಗಲಿಯರ ಪೂರ್ಣಕುಂಭ ಮೆರವಣಿಗೆಯೊಂದಿಗೆ ನಾಗನಾಥ ಭಜನಾ ಸಂಘದವರುಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಸಿದರು. ಈ ಸಂದರ್ಭದಲ್ಲಿಯುವಕರು ಪ್ರಮುಖ ಸ್ಥಳಗಳಲ್ಲಿ ಮೇಲೆ ಕಟ್ಟಿದ ಬಣ್ಣದಗಡಗಿಯನ್ನು ಹೊಡೆಯುವುದು ಗಮನ ಸೆಳೆಯಿತು‌.

ಕೃಷ್ಣ