‘ನಾಯಿಮರಿ’ ಹೇಳಿಕೆಗೆ ಪ್ರತಿಕ್ರಿಯಿಸದ ಪರಮೇಶ್ವರ್!

Advertisement

ದಾವಣಗೆರೆ: ಮುಖ್ಯಮಂತ್ರಿಯನ್ನು ನಾಯಿಮರಿಗೆ ಹೋಲಿಸಿದ್ದ ಸಿದ್ದರಾಮಯ್ಯ ಹೇಳಿಕೆಗೆ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದರ ಜತೆಗೆ ಬಿಜೆಪಿ ಸಚಿವ ಶ್ರೀರಾಮುಲು ಕಾಂಗ್ರೆಸ್ಸಿಗರನ್ನು ಬೆಕ್ಕು, ಇಲಿಗೆ ಹೋಲಿಸಿದ್ದಕ್ಕೂ ಕೂಡ ಅವರು ಪ್ರತಿಕ್ರಿಯಿಸಲಿಲ್ಲ.
ದಾವಣಗೆರೆಯಲ್ಲಿ ಸುದ್ದಿಗಾರರು ಈ ಕುರಿತು ಕೇಳಿದ ಪ್ರಶ್ನೆಗೆ, ಅದಕ್ಕೆಲ್ಲ ಉತ್ತರ ನೀಡಲು ನಮಗೆ ಸಮಯವಿಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ ಎಂದು ಜಿ.ಪರಮೇಶ್ವರ್ ಜಾರಿಕೊಂಡರು.