ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ್ದ ಘಟನೆ ಹಸಿಯಾಗಿರುವಾಗಲೇ ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದೆ.
ರಸ್ತೆಯ ಮಧ್ಯದಲ್ಲೊಂದು ಸುರಂಗ ಸೃಷ್ಟಿಯಾಗಿ ಬೈಕ್ ಸವಾರನೊಬ್ಬ ಇಂದು ಗಾಯಗೊಂಡಿದ್ದಾನೆ. ಈ ಘಟನೆ ನಡೆದಿದ್ದು ಬೆಂಗಳೂರಿನ ಅಶೋಕ ನಗರ ವ್ಯಾಪ್ತಿಯ ಬ್ರಿಗೇಡ್ ರೋಡ್ ಮಧ್ಯದಲ್ಲಿ. ಇಲ್ಲಿಯೂ ಕೂಡ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವೇಳೆ ಎಡವಟ್ಟಾಗಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.