ಧಮ್‌ ಇದ್ರೆ ಮೋದಿ ಎದುರು ಮಾತಾಡಿ

ಪ್ರಿಯಾಂಕ ಖರ್ಗೆ
Advertisement

ಕಲಬುರಗಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸ್ಥಳೀಯ ಬಿಜೆಪಿ ಶಾಸಕರು ಧೈರ್ಯ ಮಾಡಿ, ದಮ್ಮು ಇದ್ದರೆ ಪ್ರಧಾನಿ ಮೋದಿ ಎದುರು ಮಾತನಾಡಲಿ ಎಂದು ಶಾಸಕ ಪ್ರಿಯಾಂಕ ಖರ್ಗೆ ಸವಾಲು ಹಾಕಿದರು.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಗೆ ತಾಕತ್ತು ಇರದಿದ್ದರೆ ನಮ್ಮನ್ನು ಕರೆಯಿರಿ. ಕಾಂಗ್ರೆಸ್ ಶಾಸಕರು ಸಹ ಅಭಿವೃದ್ಧಿಗೆ ಕೈಜೋಡಿಸಲು ನಾವು ಸಿದ್ಧರಿದ್ದೇವೆ. ಹೀಗಾಗಿ ನೆಟೆರೋಗದಿಂದ‌ ಹಾಳಾದ ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೋಲಿ ಮತ್ತು ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.