ರೇವಣ್ಣ ಹೇಳಿಕೆಗೆ ಪ್ರೀತಂ ಗೌಡ ಟಾಂಗ್‌

Advertisement

ಹಾಸನ: ಐಐಟಿಗೆ ಮೀಸಲಿಟ್ಟ ಜಾಗವನ್ನು ಖಾಸಗಿ ಅವರಿಗೆ ಪರಭಾರೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಶಾಸಕ ಎಚ್‌.ಡಿ. ರೇವಣ್ಣ ಹೇಳಿಕೆಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಟಾಂಗ್‌ ಕೊಟ್ಟಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಐಐಟಿಗಳು ಎಷ್ಟಿರಬೇಕು ಎಂಬುವುದನ್ನು ತೀರ್ಮಾನ ಮಾಡುವುದು ಕೇಂದ್ರ ಸರ್ಕಾರ, ಅಲ್ಲದೇ ಐಐಟಿ ಸ್ಥಾಪನೆ ಮಾಡಲು 260 ಎಕರೆ ಮಾತ್ರ ಜಾಗ ಬೇಕು, ಅಷ್ಟು ಜಾಗೆಯನ್ನು ಮೀಸಲಿಟ್ಟು ಉಳಿದ ಜಾಗವನ್ನು ಕೈಗಾರಿಕೋದ್ಯಮಗಳಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಅವರು ಯಾರೋ ಒಬ್ಬರು ಹೇಳಿದಂತೆ ಸರ್ಕಾರ ನಡೆಸಲು ಆಗೋದಿಲ್ಲ ಎಂದಿದ್ದಾರೆ.