ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಿ

ಸಂತೋಷ
Advertisement

ವಿಜಯಪುರ(ಕೊಲ್ಹಾರ): ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಪಕ್ಷವನ್ನು ಗಟ್ಟಿಗೊಳಿಸಲು ಸಂಘಟಣಾತ್ಮಕವಾಗಿ ಸದಾಕಾಲ ಕ್ರಿಯಾಶೀಲರಾಗಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟಣಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ಪಟ್ಟಣದ ೧೭ನೇ ವಾರ್ಡ್ ೧೭೩ ಮತಗಟ್ಟೆಯಾದ ಯುಕೆಪಿ ವೃತ್ತದಲ್ಲಿ ಮಾತಾ ಸಾವಿತ್ರಿ ಖಾನಾವಳಿಯ ಗೋಡೆಗೆ ‘ಬಿಜೆಪಿಯೇ ಭರವಸೆ ನಿಮ್ಮ ಮತ ಬಿಜೆಪಿಗೆ’ ಎನ್ನುವ ಪಕ್ಷದ ಕಮಲ ಚಿತ್ರದೊಂದಿಗೆ ಗೋಡೆಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಕ್ಷದ ಪ್ರಣಾಳಿಕೆಯ ಕರಪತ್ರವನ್ನು ಮತ್ತು ಆಯಾ ಭಾಗದಲ್ಲಿ ಈಗಿರುವ ವಿಧಾನಸಭೆ ಸದಸ್ಯರ ಹಾಗೂ ಕಳೆದ ಬಾರಿ ಆಗಿ ಹೋದ ಶಾಸಕರ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳ ಚಿತ್ರ ಸಹಿತ ಮಾಹಿತಿ ಪತ್ರಿಕೆಯನ್ನು ಮತದಾರರ ಮನೆ ಮನೆಗೆ ತಲುಪಿಸಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಸಿಗುವಂತೆ ಬೂತ್ ಮಟ್ಟದ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದರು.