`ವಿಷಕನ್ಯೆ, ಡಿಕೆಶಿಯಿಂದ ಕಾಂಗ್ರೆಸ್ ಹಾಳು’

Advertisement

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ `ವಿಷಕನ್ಯೆ ಮತ್ತು ಸಿಡಿ ಮೇಕರ್ ಡಿ.ಕೆ. ಶಿವಕುಮಾರ ಅವರಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹೆಬ್ಬಾಳಕರ ವಿರುದ್ಧ ವೈಯಕ್ತಿಕ ಟೀಕಾ ಪ್ರಹಾರ ನಡೆಸಿದರು.
ಕಳೆದ ಹಲವು ವರ್ಷಗಳಿಂದ ಇಂತಹ ಸಿಡಿ ದಂಧೆಯ ಮೂಲಕ ಅಧಿಕಾರಿಗಳನ್ನು ಹೆದರಿಸುತ್ತ ಬಂದಿರುವ ಡಿ.ಕೆ. ಶಿವಕುಮಾರ ಗ್ಯಾಂಗಿಗೆ ಹಲವು ಅಧಿಕಾರಿಗಳು ಬಲಿಯಾಗಿದ್ದಾರೆಂದು ರಮೇಶ ಜಾರಕಿಹೊಳಿ ಆರೋಪಿಸಿದರು. ಬೆಳಗಾವಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳು, ಬೂಡಾ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ಬೆಳಗಾವಿಯ ಹಿರಿಯ ಇಂಜನೀಯರ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಈ ಸಿಡಿ ಬಲೆಗೆ ಸಿಲುಕಿ ಕಷ್ಟ ಪಡುತ್ತಿದ್ದಾರೆಂದು ಅವರು ದೂರಿದರು.